Monday, November 29, 2010

ಹಿಗೊಂದು  ಸಂಭಂದ

ಇವಳನ್ನ  ಮುಗ್ದೆ  ಎನ್ನಬೇಕೋ?  ಮೂರ್ಖೆ  ಎನ್ನಬೇಕೋ?  ನಿವೇ  ನಿರ್ಧರಿಸಿ.

ಅವಳಿಗೆ  ಅವನೆಂದರೆ ಅಪಾರ  ನಂಬಿಕೆ, ಪ್ರೀತಿ,  ವಾತ್ಸಲ್ಯ,  ಅಕ್ಕರೆ  ಹಾಗೂ  ಭಕ್ತಿ.  ಇವೇಲವು  ಅವನ  ಮೇಲೆ ಅವಳಿಗರಿವಿಲ್ಲದೆ  ಬಂದದ್ದು.  ಸಾಮಾನ್ಯವಾಗಿ  ಎಲ್ಲರು  ಅವನನ್ನು  ನೆನೆಯಲು  ಸಮಯ  ನಿಗದಿಪಡಿಸಿಕೊಂಡಿರುತ್ತಾರೆ.  ಆದರೆ  ಅವಳಿಗೆ  ಸಮಯದ  ಅರಿವಿಲ್ಲ.  ಪ್ರತಿ  ಕ್ಷಣ  ಅವನನ್ನು   ನೆನೆಯುವುದೆ  ಅವಳ  ಮುಖ್ಯ  ಕೆಲಸ.  ಅವಳದೆ  ಆದ  ಒಂದು  ಪುಟ್ಟ  ತೊಟವೊಂದಿದೆ.  ಅದರಲ್ಲಿ  ಅರಳಿದ  ಒಂದು  ಹೂವನ್ನು  ಅವಳು  ತನ್ನ  ತಲೆಯಲ್ಲಿರಿಸುವುದಿಲ್ಲ  ಆ  ಹೂ  ಎಂದಿಗೂ  ಅವನಿಗೆ  ಮೀಸಲು.  ಅವಳಲ್ಲಿ  ಅವನ  ಅದೆಷ್ಟು   ವಿಗ್ರಹಗಳಿವೆಯೋ,  ಭಾವಚಿತ್ರಗಳಿವೆಯೋ?  ಅವೆಲ್ಲವೂ  ಅವಳಿಗೆ  ಬಂದ  ಉಡುಗೊರೆಗಳೆ.  ಅವಳು  ಅವನನ್ನು  ಯಾವ  ಪರಿ  ನೆನೆಯುವಳೆಂದರೆ ಒಂದು  ಮುಂಜಾನೆ  ಅವಳಮ್ಮ  ಅವಳಲ್ಲಿ  ಕೆಳಿದರು ರಾತ್ರಿ  ಯಾಕೇ  ಮಾತಾನಾಡುತ್ತಿದ್ದೆ  ಎಂದು.  ಅದಕ್ಕೆ  ಅವಳು  ಕೆಳಿದಳು  ಏನು  ಮಾತಾನಾಡುತ್ತಿದ್ದೆ  ಎಂದು.  ಅವರಮ್ಮನ  ಉತ್ತರದಿಂದ  ಅವಳಿಗೆ  ತುಂಬಾ ಸಂತೋಷವಾಗಿತ್ತು  ಕಾರಣ  ಅವಳು  ಕನವರೆಸಿದ್ದು  ಅವನ  ಹೆಸರು.  ಅವಳು  ಅವನನ್ನು  ತುಂಬಾ  ನಂಬುತ್ತಾಳೆ  ಪ್ರೀತಿಯಿಂದ  ಬೈದದ್ದು  ಉಂಟು.  ಅವಳ  ಹುಟ್ಟುಹಬ್ಬಕ್ಕೆ  ಹೊಸ  ಬಟ್ಟೆ  ಕರಿದಿಸುವಳೊ  ಇಲ್ಲವೋ   ಅವನ  ಹುಟ್ಟುಹಬ್ಬಕ್ಕೆ  ಮರೆಯದೆ  ಕರಿದಿಸಿ  ಸಂಬ್ರಮಿಸುತ್ತಾಳೆ.  ಅವಳನ್ನು  ಅತೀ  ಹೆಚ್ಚು   ಪ್ರೀತಿಸುವುದು  ಅವನೇ  ಎಂದು  ತಿಳಿದಿದ್ದಾಳೆ.  ಅವನ  ಬಗ್ಗೆ  ಅವಳೋಂದಿಗೆ  ತರ್ಕ  ಮಾಡಲು  ಯಾರಿಂದಲು  ಸಾಧ್ಯವಿಲ್ಲ.  ಅವಳು  ಎಂದು  ಕಾಣದ  ಅವನಲ್ಲಿ  ಸದಾ  ಮಾತಾನಾಡುತ್ತಿರುತ್ತಾಳೆ.  ಅವಳಿಗೆ  ಅವನ್ನುತ್ತರದ   ಅವಶ್ಯಕತೆ  ಇಲ್ಲ.  ಯಾಕೆಂದರೆ  ಅವನು  ಸದಾ  ತನೊಂದಿಗಿರುವನೆಂಬ  ಬಲವಾದ  ನಂಬಿಕೆ.  ಇಷ್ಟಕ್ಕು  ಜೀವನವೆಂದರೆ  ನಂಬಿಕೆ  ಅಲ್ಲವೇ.  ಒಮ್ಮೊಮ್ಮೆ ಅವಳು  ಹೀಗೂ  ಯೋಚಿಸುತ್ತಾಳೆ ಸಮಯವಿಲ್ಲದ  ಸಮಯದಲ್ಲಿ  ನೆನೆಯುವುದರಿಂದ  ಅವನಿಗೆನಾದರೂ  ತೊಂದರೆಯುಂಟಾಗುತ್ತದೆಯೋ ಎಂದು.  ಅವಳಿಗೆ  ಇಷ್ಟವಿಲ್ಲದ  ವಿಷಯ  ಒಂದಿದೆ  ಅದೇನೆಂದರೆ  ಅವನನ್ನು  ಇವಳು  ಬಿಟ್ಟು  ಬೆರಾರು  ನೆನೆಯಬಾರದು.  ಆದರೆ  ಯಾರಿಗಾದರೆ  ಅವನಿಷ್ಟವೆಂದು  ಇವಳಿಗೆ  ತಿಳಿದರೆ  ಅವರಮೇಲೆ  ಇವಳಿಗೆ  ಪ್ರೀತಿ  ಹೆಚ್ಚಾಗುತ್ತದೆ.

ಇಷ್ಟು   ಓದಿದ  ನಂತರ  ನಿಮಗೆ  ತಿಳಿದಿರುತ್ತದೆ  ಅ  ಅವನು  ಮನುಷ್ಯನಲ್ಲವೆಂದು. ಅವನು  ಬೆರಾರು  ಅಲ್ಲ  ಶ್ರೀ ಪಾರ್ವತಿಪರಮೇಶ್ವರನ  ಪುತ್ರ  ಶ್ರೀಗಣೇಶ.  ಅದರೆ  ಅವಳಿಗೆ  ಮಾತ್ರ  ಅವನು  ಸಾಮಾನ್ಯ  ಮನುಷ್ಯ  ಹಾಗೂ  ಅವಳ  ಪ್ರಿತಿಯ  ಅಣ್ಣ.  ಅಕ್ಕರೆಯಿಂದ  ನೋಡಿಕೊಳ್ಳುವ  ಪ್ರೀತಿಯಿಂದ  ಮಾತಾನಾಡಿಸುವ ಅವಳೊಂದಿಗೆ  ಸದಾ  ಇರುವ  ಪ್ರೀತಿಯ ಅಣ್ಣ. ಅವಳ  ಪ್ರೀತಿಯ  ಅಣ್ಣ  ಮಾತ್ರ............

Monday, November 22, 2010

ನಾ  ಕಂಡಂತೆ  ಧರ್ಮಸ್ಥಳ
 

ಶ್ರೀ  ಕ್ಷೇತ್ರ ಧರ್ಮಸ್ಥಳ

"ಇದು  ನನ್ನ  ಮೊದಲ  ಬರವಣಿಗೆ  ತಪ್ಪಿದ್ದರೆ  ಕ್ಷಮೆ  ಇರಲಿ"

ಸುಂದರ  ಪ್ರಕೃತಿಯ  ಮಡಿಲಲ್ಲಿ  ಶ್ರೀ ಮಂಜುನಾಥನ  ಮಂದಿರ. ಅ  ದಯಾಮಯಿಯನ್ನು  ನೊಡಲು  ಎರಡು  ಕಣ್ಣು  ಸಾಲದು. ಅವನನ್ನು  ನೆನೆದರೆ  ಸಾಕು ಈ  ಜೀವನಕ್ಕೆ  ಇನ್ನೆನ್ನು  ಬೇಕು.  ಅವನ ಧ್ಯಾನದಿಂದ  ಪರಿಪುರ್ಣವಲ್ಲವೆ  ಈ  ಜೀವನ.  ಅ  ಮಂಜುನಾಥನನ್ನೆ  ನೋಡಿಕೊಳ್ಳಲು  ಅವನೇ  ನೇಮಿಸಿಕೊಂಡ  ನಿಸ್ವಾರ್ಥ  ಸೇವಕರು  ಶ್ರೀ ವೀರೆಂದ್ರ  ಹೆಗ್ಡೆಯವರು.  ಆ  ಮಂದಿರದ  ಪ್ರತಿಯೊಂದು  ನಿಯಮವು  ಅವರ  ನಿಸ್ವಾರ್ಥತೆಯನ್ನು  ಸಾರುತ್ತದೆ.  ಎಲ್ಲ  ಭಕ್ತರಿಗು  ಒಂದೆ  ನಿಯಮ  ಅವನು  ಧನಿಕನಾಗಲಿ ಅಥವಾ  ಬಡವ?  ಎಲ್ಲರು  ಸಾಲಿನಲ್ಲಿ  ಬಂದೆ  ಆ  ಕರುಣಾಮಯಿ  ಶ್ರೀ  ಮಂಜುನಾಥನ  ದರ್ಶನ  ಮಾಡಬೇಕು.  ಅಲ್ಲಿ  ಉಳಿದುಕೊಳ್ಳುವ  ಕೊಠಡಿಯ ಬಾಡಿಗೆ  ಮೊತ್ತ  ರೂ.೧೦  ನಾವು  ಖಾಲಿಮಾಡುವಾಗ  ಅದೆ  ಮೊತ್ತದ  ಉಪಯುಕ್ತ  ಪುಸ್ತಕ  ನಮಗೆ  ಉಚಿತವಾಗಿ  ದೊರೆಯುತ್ತದೆ. ಖಾಲಿ  ಇಲ್ಲದಿರುವಾಗ ಅದಕ್ಕೆಂದು  ಬೆರೆಯೆ  ವ್ಯವಸ್ತೆಯಿದೆ  ಅದೆನೆಂದರೆ  ಮಲಗಲು  ಉಚಿತ  ಸ್ಥಳ  ಜೊತೆಗೆ  ಒಂದು ಚಾಪೆ.  ಉಚಿತ  ಪಾಯಿಕಾನೆಗಳು(Toilet) ಹಾಗೂ  ಸ್ನಾನದ ಮನೆ ಅದು  ಶುಚಿತ್ವವಾಗಿ  ಇಲ್ಲದಿದ್ದರೆ  ಅದಕ್ಕೆ  ಕಾರಣ  ಸಾರ್ವಜನಿಕರೆ (ಈ  ಸಾರ್ವಜನಿಕರಿಗೆ  ಶುಚಿತ್ವವಾಗಿ  ಇಟ್ಟುಕೊಳ್ಳಲು  ಬರುವುದಿಲ್ಲವಲ್ಲ). (ಈ  ಲೇಖನ  ಓದುವ  ಎಲ್ಲಾ  ಭಕ್ತರಲ್ಲಿ  ನನ್ನದೊಂದು  ಮನವಿ  ಯಾರೇ  ಯಾವುದೇ  ಪುಣ್ಯ  ಕ್ಷೇತ್ರಕ್ಕೆ  ಹೋದರು ನಿಮ್ಮ  ಮನೆಯೆಂದು  ತಿಳಿದು  ಅಲ್ಲಿನ  ಶುಚಿತ್ವವನ್ನು  ಕಾಪಾಡಿ).  ಯಾವುದಕ್ಕು  ಹಣದ  ಅಪೇಕ್ಷೆ  ಇಲ್ಲ.  ಅಲ್ಲಿ  ಕೆಲಸ  ನಿರ್ವಹಿಸುವ  ಪ್ರತಿಯೊಬ್ಬರು  ಸೌಮ್ಯವಾಗಿ  ವರ್ತಿಸುತ್ತಾರೆ  ಇದೆಲ್ಲ ಧರ್ಮಾಧೀಕಾರಿ ಹೆಗ್ಡೆಯವರ ಮಾರ್ಗದರ್ಶನದಿಂದ.  ಉಚಿತ  ಭೋಜನ ಸಾಲಿನಲ್ಲಿ  ನಿಲ್ಲುವ  ಅವಶ್ಯಕತೆಯಿಲ್ಲ  ಕಾರಣ  ತುಂಬಾ  ದೊಡ್ಡದಾದ  ಭೋಜನಶಾಲೆ.  ಉಚಿತ  ಮದುವೆ.  ಇಂತಹ   ಪುಣ್ಯದ  ಕಾರ್ಯವನ್ನು   ಶ್ರೀ  ಮಂಜುನಾಥನ  ದಯೆಯಿಂದ ಧರ್ಮಾಧೀಕಾರಿ  ಶ್ರೀ  ಹೆಗ್ಡೆಯಂತವರಿಂದ  ಮಾತ್ರ  ಸಾಧ್ಯ. ಅಲ್ಲಿನ ಒಂದು ಪ್ರತೀತಿ (ಮನೆಯ  ಹಿರಿಯರ  ಮಾತು) ಅದೆನೆಂದರೆ  ಆ  ದಯಮಯಿ  ಶ್ರೀ  ಮಂಜುನಾಥನನ್ನು  ದರ್ಶನಮಾಡುವ  ಮೊದಲು  ನೇತ್ರಾವತಿಯಲ್ಲಿ  ಸ್ನಾನಮಾಡಬೇಕೆಂಬುದು   ಅದರೆ  ಅಲ್ಲಿ  ಸ್ನಾನಮಾಡಲು  ಮನಸೇ  ಆಗುವುದಿಲ್ಲ  ಕಾರಣ  ಅದು  ಶುಚಿಯಾಗಿಲ್ಲದಿರುವುದು (ಅದಕ್ಕೂ  ಸಾರ್ವಜನಿಕರೆ  ಕಾರಣ).  ಒಂದು  ಹೇಳಲೆಬೇಕಾದ ವಿಷಯ  ಇಲ್ಲಿ    ವಿಧ್ಯಾಭ್ಯಾಸದ  ವ್ಯವಸ್ಥೆ  ಕೂಡ  ಇದೆ.  ಧರ್ಮಾಧೀಕಾರಿಗಳು  ಪ್ರತಿ  ವರ್ಷವು  ಬೇರೆ  ಬೇರೆ  ಊರಿನಲ್ಲಿ ರೈತರಿಗಾಗಿ  ಒಂದು  ಮೇಳವನ್ನು  ಏರ್ಪಡಿಸುತ್ತಾರೆ  (ರೈತಮೇಳ - ಜಾತ್ರೆ).   ಅದರಲ್ಲಿ  ಲಕ್ಷಂತರ  ರೈತರು  ಪಾಲ್ಗೊಳ್ಳುತ್ತಾರೆ.  ಸ್ಪರ್ಧೆಗಳನ್ನು   ಏರ್ಪಡಿಸಿರುತ್ತಾರೆ.  ಗೆದ್ದವರಿಗೆ  ಬಹುಮಾನಗಳನ್ನು  ವಿತರಿಸುತ್ತಾರೆ.