Monday, January 9, 2012


ಮರೆಯಾಗಿ  ನೋವಾಗಿ  ಉಳಿದದ್ದು


ಯಾವುದೇ   ಒಂದು   ಚಿಕ್ಕ   ವಸ್ತುವನ್ನ   ಕಳೆದುಕೊಂಡರೆ  ಅದನ್ನ  ಹುಡುಕಿ  ನಾವು  ಪರಿತಪಿಸುವ  ಪರಿ  ಹೇಗಿರುತ್ತದೆ?  ನಾವು  ಮತ್ತೆ  ಖರೀದಿಸಬಹುದಾದ  ವಸ್ತುವಿನ  ಮೇಲೆಯೇ  ನಮಗೆ  ಎಷ್ಟು   ವ್ಯಾಮೋಹ.  ಹಾಗಿರುವಾಗ   ನಮ್ಮಿಂದ  ಈ  ಭೂಮಿಯನ್ನ  ನೋಡಬೇಕಾದ  ಒಂದು  ಜೀವ  ಇಲ್ಲವಾದಾಗಿನ  ನೋವು  ಹೇಳತಿರದು.  ಆಗ  ದೇಹಕ್ಕಾಗುವ  ನೋವು  ಎನು  ಇಲ್ಲ.  ದೇಹದ  ನೋವು  ಮಾಗಿ  ಎಷ್ಟು  ಸಮಯವಾದರು.  ಮನಸ್ಸಿನಲ್ಲಾದ  ಗಾಯ  ಮಾಸುವುದೇ  ಇಲ್ಲ.  ಆ  ವಿಷಯಕ್ಕೆ  ಸಂಬಂಧಪಟ್ಟ  ಯಾವುದೇ  ವಸ್ತು,  ವಿಷಯ  ನೋಡಿದಾಗಲೆಲ್ಲ   ಮನಸ್ಸಿಗಾಗುವ  ನೋವು  ಯಾರಿಗೂಬೇಡ.  ಎಲ್ಲೊ  ಮನಸ್ಸಿನ  ಮೂಲೆಯಲ್ಲಿ  ಪಾಪ  ಪ್ರಙ್ನೆ.  ನನ್ನಿಂದಲೆ  ಹೀಗಾಯಿತೆನೊ  ಎಂಬ   ವೇದನೆ.  ಬದುಕೇ   ಸಾಕೆನ್ನಿಸುವಷ್ಟು   ಬೇಜಾರು. 


ಇಷ್ಟಕ್ಕು  ನಾ  ಮಾಡಿದ  ತಪ್ಪಾದರೂ  ಎನು  ಎಂಬ  ಪ್ರಶ್ನೆಗೆ   ನನಗೆ   ಇನ್ನು   ಉತ್ತರ   ದೊರೆತಿಲ್ಲ.  ನನ್ನ  ತಪ್ಪೆನಿಲ್ಲವೆಂದರೂ  ಕಳೆದುಕೊಂಡವಳು  ಮಾತ್ರ  ನಾನೇ.   ಇದರ   ನೋವು  ಮಾತ್ರ  ನಾನು  ಬದುಕಿರುವವರೆಗೂ  ಇರುತ್ತದೆ.  ಈ  ಪ್ರಶ್ನೆಗಳು  ನನ್ನಲ್ಲಿ  ಮುಡಿ  ಬದುಕು  ಮರುಭೂಮಿಯಂತಾಗಿದೆ.  ನೋವಿಗೆ  ಕೊನೆಇಲ್ಲದಂತಾಗಿದೆ  ಜೀವನದಲ್ಲಿ.  ಇದಕ್ಕೆಲ್ಲ  ಪರಿಹಾರವೇ  ಇಲ್ಲವೇ!  


ಜೀವನ  ಎಲ್ಲರಿಗೂ  ಒಂದೇ  ತರಹ  ಇರುವುದಿಲ್ಲ.  ನೋವು  ಮಾತ್ರ  ಎಲ್ಲರಿಗೂ  ಒಂದೇ.  ನಾನ್ಯಾಕೆ  ಹೀಗಿದ್ದೀನಿ   ಅನ್ನೋ  ಪ್ರಶ್ನೆಗೆ  ಎಷ್ಟೋ  ವರ್ಷದಿಂದ  ಉತ್ತರ  ಹುಡುಕಿ  ಸೋತಿದ್ದೇನೆ. ಸದಾ  ಸಂತೋಷವಾಗಿರಲು  ನನ್ನಿಂದ  ಯಾಕೊ  ಸಾಧ್ಯಾವಾಗುತ್ತಿಲ್ಲ.  ಎನಾದರೂ  ಸಂತೋಷಕ್ಕೂ  ನನಗೂ  ಆಗಿಬರುವುದಿಲ್ಲ?  ಅಂತ  ಅನುಮಾನ  ಬೇರೆ  ಹುಟ್ಟಿಕೊಂಡಿದೆ.  ನನಗೂ  ನೋವಿಗೂ  ಎಲ್ಲಿಲ್ಲದ  ಅವಿನಾಭಾವ  ಸಂಬಂಧ.  ನನ್ನನ್ನ  ನೋವು  ಹುಡುಕಿಕೊಂಡು  ಬರಲ್ಲ  ನಾನೇ  ಯಾವಾಗ್ಲೂ  ಅದನ್ನ  ಹುಡುಕಿ  ಅನುಭವಿಸುತ್ತೇನೆ  ಅಂತ  ಅನಿಸುತ್ತೆ.  ಇದಕ್ಕೆಲ್ಲ  ಯಾರಲ್ಲಿ  ಉತ್ತವಿದೆಯೋ  ಗೊತ್ತಿಲ್ಲ.  


Monday, March 28, 2011

ಅನುಭವಗಳು ಬದಲಾದಾಗ!

ಯಾರ  ಜೀವನದಲ್ಲಿ  ಯಾವಾಗ  ಎನ್  ನಡೆಯುತ್ತೆ  ಹೇಗೆ  ನಡೆಯುತ್ತೆ   ಅಂತಾನೆ  ಗೋತ್ತಾಗೊದಿಲ್ಲ.  ಹೀಗೆ  ನಡೆಯುತ್ತೆ  ಅಂತ   ಊಹಿಸೊದಕ್ಕೂ  ಯಾರಿಂದ್ಲು  ಸಾಧ್ಯನೇ  ಇಲ್ಲ.  ಯಾವುದೇ  ಒಂದು  ಘಟನೆ  ನಡೆದಮೇಲೆನೆ   ಗೋತ್ತಾಗೊದು  ಹೀಗೆಲ್ಲ  ಆಗುತ್ತೆ  ಅಂತ.  ಹೀಗೆಲ್ಲ  ಆಗ್ಲುಬಹುದು  ಅಂತ  ನಮ್ಮ   ಕಲ್ಪನೆಗೂ   ಬಂದಿರಲ್ಲ.  ಬರೀ   ಕಲ್ಪನೆಯಲ್ಲೇ  ಬದುಕುವವರಿಗೂ  ಕೂಡ  ಗೊತ್ತಿರಲ್ಲ  ಬಿಡಿ  ಹೀಗೆಲ್ಲ  ಆಗಬಹುದಿತ್ತು  ಅಂತ.  ಘಟನೆಗಳು  ನಡೆದಮೇಲೆ  ಹೀಗೂ  ಸಹ  ಆಗಬಹುದು  ಅಂತ  ಅನಿಸುತ್ತೆ  ಅಷ್ಟೆ.  ಯಾಕೆ  ಈ  ಪೀಟಿಕೆ  ಅಂದ್ರೆ  ನನ್ನ  ಜೀವನದಲ್ಲಿ   ನಾನು  ಅಂದುಕೊಂಡಿದ್ದು  ಮಾತ್ರ  ನಡೆಯುತ್ತೆ  ಎಂದು  ತಿಳಿದಿದ್ದೆ  ಆದರೆ  ಈಗ  ಆಗುತ್ತಿರುವ  ಬದಲಾವಣೆಗಳನ್ನ  ನಾನ್ಯಾವತ್ತು  ಕಲ್ಪಿಸಿಕೊಂಡಿರಲಿಲ್ಲ.  ಈಗ  ಆಗುತ್ತಿರುವ  ಬದಲಾವಣೆಗಳನ್ನ  ನನ್ನ  ಅದೃಷ್ಟ ಅಂತ  ನಿರ್ಧರಿಸಲು  ಸಾಧ್ಯವಿಲ್ಲ  ನಾಳೆ  ಎನಾಗಬಹುದು  ಅಂತ  ಯಾರಿಗೆ  ಗೊತ್ತು  ಆದರೆ ಪಾಸಿಟಿವಾಗಿ ಇರಲಿ  ಅಂತ  ಗಣೇಶನಲ್ಲಿ   ಕೇಳ್ಕೊಬಹುದು  ಅಷ್ಟೆ.  ನಿಜ  ಹೆಳಬೇಕು  ಅಂದ್ರೆ   ನಾನು   ವಾಸ್ತವಕ್ಕಿಂತ  ಕನಸಿನ  ಲೋಖದಲ್ಲಿ  ಬದುಕ್ಕಿದ್ದೆ  ಹೇಚ್ಚು.  ಈ  ಕನಸಿನಲೋಖ  ಎಷ್ಟು  ಸುಂದರವೆಂದರೆ  ಅಲ್ಲಿ  ಎಲ್ಲವೂ  ಉಚಿತ.  ಅಲ್ಲಿನ  ಎಲ್ಲವು   ನಮಗೆ  ಪೂರಕವಾಗಿಯೇ ಇರುತ್ತವೆ.  ಈಗಲೂ  ಸಹ  ನನಗೆ  ಅನಿಸುತ್ತೆ   ನನ್ನ  ತಾತಾನಷ್ಟು  ನನ್ನ   ಪ್ರೀತಿಸುವವರು  ಯಾರು  ಸಿಕ್ಕಿಲ್ಲ,   ಸಿಕ್ಕೊದು  ಇಲ್ಲ  ಅನಿಸುತ್ತೆ.  ನನಗೆ  ೨೫  ವರ್ಷ  ಆಗಿದೆ.  ಈಷ್ಟು   ವರ್ಷದಲ್ಲಿ  ನನಗಾಗಿರುವ  ಅನುಭವ  ಯಾರೊಂದಿಗಾದ್ರು  ಹಂಚಿಕೊಂಡ್ರೆ  ನನ್ನನ್ನ  ಅಜ್ಜಿ  ಅಂತ  ಬೇಕಾದ್ರು   ತಿಳಿದುಕೊಳ್ಳುತ್ತಾರೆ.  ಈ  ಜೀವನ  ನನಗೆ   ತುಂಬಾ  ಹೇಳಿಕೊಟ್ಟಿದ್ದೆ,  ಅನುಭವಿನ್ನಾಗಿಸಿದೆ.  ಆದರೂ  ನಾನು  ಯಾವಗಲೂ   ಸಂತೋಷವಾಗಿರಬೇಕು  ಅಂದ್ರೆ   ಅದು  ಮಾತ್ರ   ನನ್ನಿಂದ   ಸಾಧ್ಯನೆ  ಇಲ್ಲ. 

ಜೀವ  ಇರುವ  ಯಾವುದೆ  ಮನುಷ್ಯನಿಗೆ  ಸುಖ, ದುಖಃಗಳೆರಡು  ಮಿಶ್ರಿತವಾಗಿರಲೇಬೇಕು  ಇಲ್ಲದಿದ್ದರೆ   ಜೀವನ  ನಿರಸವಾಗಿಬಿಡುತ್ತದೆ,  ಇದೆಲ್ಲ  ಹೇಳಲು  ಕೇಳಲು  ತುಂಬಾ  ಚೆನ್ನಾಗಿರುತ್ತೆ  ಜೀವನದಲ್ಲಿ  ಅಳವಡಿಸಿಕೊಳ್ಳಲು  ನನಗಂತೂ ಅಸಾಧ್ಯವಾದ  ಮಾತು.  ಇದನ್ನ   ಸಾಧ್ಯವಾಗಿಸಿಕೊಂಡವರು  ಮಾತ್ರ   ಸದಾ  ಸಂತೋಷವಾಗಿರುವರು.  ಯಾಕೆಂದರೆ  ಮಿಶ್ರಿತ  ಅಂದ್ರೆ  ಸುಖದುಖಃ,  ಆದರೆ  ಬರೀ  ದುಖಃ  ಹೆಚ್ಚಾದಾಗ  ಇದು  ಅಸಾಧ್ಯವಾಗುತ್ತೆ  ಅನಿಸುತ್ತೆ  ಇದು  ಸರಿನೋ  ತಪ್ಪೋ  ನನಗೆ  ಗೊತ್ತಿಲ್ಲ  ಇದು  ನನ್ನ  ಅನುಭವ. 

Monday, February 21, 2011

ದೇವರು?????

ದೇವರು, ಆ ಪದಕಿರುವ ಶಕ್ತಿ, ಉಚ್ಚರಿಸಿದಾಗ ಅಗುವ ಸಂಚಲನ, ಅವನ ಸ್ಮರಣೆಯಿಂದ ಸಿಗುವ ನೆಮ್ಮದಿ, ಇದು ಇನ್ನೆಲ್ಲಿಯು ಸಿಗಲು ಸಾಧ್ಯವೇ ಇಲ್ಲ ಇದು ನನ್ನ ಅನುಭವ.

ದೇವರಿಲ್ಲದಿದ್ದಿದ್ದರೆ? ಅಬ್ಬಾ! ಊಹಿಸಲಾಗದಂತ ಪ್ರಶ್ನೆ. ಅವನೇ ಇಲ್ಲದಿದ್ದಿದ್ದರೆ ಇಷ್ಟು ಸುಂದರ ಪ್ರಕೃತಿ ಎಲ್ಲಿರುತ್ತಿತ್ತು. ಅಯ್ಯೋ ನಾನು ನೀವುಗಳೆಲ್ಲಿರುತ್ತಿದ್ದೆವು ಇದರೆ ಬಗ್ಗೆ ಚರ್ಚಿಸಲು. ಅವನ ಸೃಷ್ಟಿಯಲ್ಲಿ ಎಲ್ಲವೂ ಅದ್ಬುತವೆ. ಆದರೆ ಈಗೀಗ ನನ್ನನ್ನ ಅತೀ ಹೆಚ್ಚು ಕಾಡುವ ಪ್ರಶ್ನೆ ಎಂದರೆ ದೇವರು ಎನ್ ಮಾಡ್ತಾ ಇದ್ದಾನೆ. ಒಮ್ಮೊಮ್ಮೆ ಅವನು ಇದ್ದನೋ ಇಲ್ಲವೋ ಎಂಬ ಪ್ರಶ್ನೆ ಕೂಡ ಬರತೊಡಗಿದೆ. ಅವನ್ನನ್ನ ಅತೀಯಾಗಿ ನಂಬುವ ನನಗೆ ಈ ಪರಿ ಪ್ರಶ್ನೆಗಳು ಉದ್ಬವಿಸಿದರೆ ನಾಸ್ತಿಕರಲ್ಲಿ ಇನ್ಯಾವ ಪರಿ ಪ್ರಶ್ನೆಗಳು ಮೂಡಬಹುದು. ದೇವರೆನಾದರೂ ಭೂಮಂಡಲವನ್ನು ಮರೆತು ಹಾಯಾಗಿರುವನೆ. ಇಲ್ಲ ಮನುಷ್ಯರನ್ನು ಸೃಷ್ಟಿಸಿ ತಪ್ಪುಮಾಡಿದೆನೆಂದು, ಅವರೆನಾದರೂ ಮಾಡಿಕೊಳ್ಳಲ್ಲಿ ಎಂದು ಸುಮ್ಮನಿರುವನೇ. ಅವನೇ ಸೃಷ್ಟಿಸಿದ ಮನುಷ್ಯರು ಅವನ ಹಿಡಿತದಲ್ಲಿಲ್ಲವೆಂದು ನೋಂದು ಸುಮ್ಮನಾಗಿರುವನೆ. ಹೀಗೆಲ್ಲ ಅವನಿಗೆ ಅನಿಸಿದ್ದರೆ ಅಯ್ಯೋ ಪಾಪ ಅವನು ಎಷ್ಟು ನೋಂದಿರುವನೋ. ದೇವರ ಬಗ್ಗೆ ಮರುಕ ಉಂಟಾಗುತ್ತಿದೆ. ಪ್ರಪಂಚದಲ್ಲಿ ಹೆಚ್ಚು ಕೆಟ್ಟವಿಷಯಗಳೇ ನಡೆಯಲು ಪ್ರತ್ಯಕ್ಷ್ಯವಾಗಿ ಪರೋಕ್ಷವಾಗಿ ಅವನೆ ಕಾರಣ. ಮನುಷ್ಯರಿಗೆ ಅತೀಯಾದ ಬುದ್ದಿ ಕೊಟ್ಟು ದೇವರನ್ನ ಈ ಹಾಳು ಮನುಷ್ಯರು ಕಡೆಗಣಿಸುವಂತಾಯಿತೆ?

ಅವನ ಸೃಷ್ಟಿ ಅದ್ಬುತವೆನಿಸುತ್ತಿತ್ತು. ಈಗ ಪ್ರಪಂಚ ಭಯಂಕರವಾಗಿ ಮಾರ್ಪಟ್ಟಿದ್ದೆ ಎಂದರೂ ತಪ್ಪಾಗಲಾರದೂ. ಅವನಿಗರಿವಿಲ್ಲದೆ ಒಂದು ಹುಲ್ಲುಕಡ್ಡಿಯು ಅಲುಗುವುದಿಲ್ಲವೆನ್ನುವರು ಆದರೆ ಈಗ ಪ್ರಪಂಚದಲ್ಲಿನ ಆಗುಹೊಗುಗಳನ್ನ ಕಂಡರೆ ಬರೀ ಪ್ರಶ್ನೆಗಳೇ ಮೂಡುತ್ತವೆ. ಈ ಪ್ರಶ್ನೆಗಳಿಗೆಲ್ಲ ದೇವರು ಹೇಗೆ ಉತ್ತರಿಸುವನೋ ನಾನರಿಯೆ. ನಿಮ್ಮಲೆನಾದರೂ ಉತ್ತರವಿದ್ದರೆ ದಯಮಾಡಿ ನನಗೂ ತಿಳಿಸಿ.

||ಓಂ ಗಂ ಗಣಪತ್ಯೆ ನಮಃ||

Monday, January 24, 2011

ನನ್ನ  ಪ್ರೀತಿಯ  ತಾತಾ.

ನಾನು  ತುಂಬಾ  ನತದೃಷ್ಟೆ  ಎಂದು  ತಿಳಿದಿದ್ದೆ.   ಅದಕ್ಕೆ   ಕಾರಣಗಳು  ಹಲವು,  ಅವುಗಳಲ್ಲಿ  ಮೊದಲನೆಯವರು  ನನ್ನ  ತಂದೆ,  ಅವರಿಗೆ  ನಾನಿಷ್ಟವಿರಲ್ಲಿಲ್ಲ  ಎನ್ನುವುದಕ್ಕಿಂತ   ಅವರಿಗೆ  ನನ್ನ  ತಂಗಿ  ಎಂದರೆ  ಪ್ರಾಣ  ಎಂದು  ತಿಳಿಸಲು  ಇಷ್ಟಪಡುತ್ತೇನೆ  ಹಾಗೂ  ಅವರ  ಬಗ್ಗೆ  ಹೆಚ್ಚು  ಹೇಳಲು  ಇಷ್ಟಪಡುವುದಿಲ್ಲ  ಯಾಕೆಂದರೆ  ಅವರೀಗ  ನಮ್ಮೊಂದಿಗಿಲ್ಲ.  ಅವರು  ನಮ್ಮನ್ನಗಲಿ  ಹಲವು  ವರ್ಷಗಳೇ  ಕಳೆದಿವೆ.  ನನಗೂ  ಸಹ  ನನ್ನ  ತಂಗಿ  ಎಂದರೆ  ಪ್ರಾಣ  ಅವಳಿಗೂ  ನಾನೆಂದರೆ   ತುಂಬಾ  ಪ್ರೀತಿ.  ಎರಡನೆ  ಕಾರಣ  ನನ್ನಮ್ಮ  ಅವಳನ್ನು   ನಾನು ದೂಷಿಸಲು  ಇಷ್ಟಪಡುವುದಿಲ್ಲ   ಯಾಕೆಂದರೆ  ಅವಳ  ಪರಿಸರ  ಹಾಗೂ  ಪರಿಸ್ಥಿತಿ  ಅವಳು  ನನ್ನನ್ನು   ಕಡೆಗಣಿಸುವಂತೆ  ಮಾಡಿದೆ.  ಅವಳು  ನನ್ನನ್ನು   ಕಡೆಗಣಿಸುವಳೆಂದು   ನಾನು   ಎಂದಿಗೂ   ಅವಳನ್ನ   ದ್ವೇಶಿಸಿಲ್ಲ  ಮುಂದೆಯೂ  ಸಹ  ದ್ವೇಶಿಸುವುದಿಲ್ಲ.  ಮೂರನೆಯವರು ಸಂಭಂದಿಗಳು  ಅವರಿಗೆ  ಅವರವರದೆ  ತೊಂದರೆಗಳು  ಹೆಚ್ಚು  ಆದ್ದರಿಂದ  ಅವರನ್ನು  ಸಹ  ನಾನು  ದೂಷಿಸುವುದಿಲ್ಲ.   ಇನ್ನೂ  ನಾಲ್ಕನೆಯವರು  ಸ್ನೇಹಿತರು,  ಅವರಲ್ಲಿ  ಹೆಚ್ಚಿನವರು  ಸಹಾಯ ಪಡೆದು  ನಂತರ  ನನ್ನನ್ನ  ದೂಷಿಸಿದ್ದಾರೆ.   ಇಲ್ಲಿ  ಯಾರನ್ನು  ನಾನು  ದೂಷಿಸಲು  ಇಷ್ಟಪಡುವುದಿಲ್ಲ.  ಅವರವರ ಪ್ರೀತಿ  ಅವರವರ  ಇಷ್ಟ.  ಆದರೆ   ಇವರೆಲ್ಲರ  ಪ್ರೀತಿಯನ್ನು   ಒಬ್ಬರಿಂದ  ಪಡೆಯಲು  ಸಾಧ್ಯವೆಂದು  ನಾನು  ಎಂದು  ಕನಸ್ಸಿನಲ್ಲಿಯೂ ತಿಳಿದಿರಲಿಲ್ಲ.  ಆ  ಪ್ರೀತಿಯೇ  ನನ್ನ  ತಾತಾ.  ಅವರು  ನನ್ನ  ಸಂಭಂದಿಯಲ್ಲ,  ಅದರೂ  ನನ್ನನ್ನು  ಅತೀ  ಹೆಚ್ಚು   ಪ್ರೀತಿಸುವ  ನನ್ನ  ಪ್ರೀತಿಯ  ತಾತಾ.  ನನಗೆ  ತುಂಬಾ  ಪ್ರೀಯವಾದ   ಎರಡು  ಪದಗಳಿವೆ  ಅವು  ಗಣೇಶ ಹಾಗೂ  ನನ್ನ  ತಾತಾ.     ಅವರಿಗೆ  ನಾನೆನು  ಅಲ್ಲದಿದ್ದರು  ಅವರು  ನನ್ನನ್ನು  ನೋಡಿಕೊಳ್ಳುವ  ಪರಿ  ನನ್ನ  ಬಗ್ಗೆ  ಅವರಿಗಿರುವ  ಕಾಳಜಿ  ಇವೆಲ್ಲವೂ  ನನ್ನನ್ನು  ಅದೃಷ್ಟವಂತೆಯನ್ನಾಗಿಸಿದೆ.  ಅವರು  ನನಗೆ  ಇಷ್ಟವಿಲ್ಲದೆ  ದೊರೆತ  ಅದೃಷ್ಟ. ಈ  ವಿಷಯಕ್ಕೆ  ನಾನು  ನನ್ನ  ಗಣೇಶನಿಗೆ  ಕೃತಘ್ನಳು.  ಅವರು  ನನ್ನ  ಬಗ್ಗೆ   ಕಾಳಜಿವಹಿಸಲು  ಕಾರಣ  ಅವರ  ಮಗಳು.  ಅವರ  ಮಗಳಿಗೆ  ನಾನು  ಚಿರರುಣಿ.  ಅವರೀಗ  ಈ  ಭೂಮಿಯಮೇಲೆ  ಇಲ್ಲ  ಅವರ  ದುರದೃಷ್ಟವೇ  ನನ್ನ  ಅದೃಷ್ಟವಾಗಿದೆ  ಎಂದರೆ  ತಪ್ಪಾಗಲಾರದು.   ಅವರು  ವಿಧಿವಶರಾದ  ಮೇಲೆ  ನಾನು  ನನ್ನ  ತಾತಾನ  ಪ್ರೀತಿಯ  ಮಗಳು  ಹಾಗೂ  ಮೊಮ್ಮಗಳೂ  ಅಗಿರುವೆ.  ನನ್ನ   ತಾತಾ  ಎಷ್ಟು  ನನ್ನ  ಬಗ್ಗೆ   ಕಾಳಜಿವಹಿಸುವವರೆಂದರೆ  ನನ್ನಲ್ಲಿನ್ನ  ಒಂದು ಕೆಟ್ಟಗುಣಗಳನ್ನೂ  ಅವರು  ಸಹಿಸುವುದಿಲ್ಲ.   ನಾನು  ಯಾವುದೆ  ಕೆಲಸವನ್ನು  ಅವರಿಗೆ  ತಿಳಿಸದೆ  ಮಾಡುವುದಿಲ್ಲ.  ಅವರು  ನನ್ನ  ಮಾರ್ಗದರ್ಶಿಗಳು,  ಹಿತೈಷಿಗಳು,  ಗುರುಗಳು  ಹಾಗೂ  ನನ್ನ  ಆತ್ಮಿಯ  ಗೆಳೆಯ,  ನನ್ನ  ಪ್ರೀತಿಯ  ಅಮ್ಮ   ಅಪ್ಪ   ಎಲ್ಲವೂ  ಅವರೇ.   ಅವರು  ನನ್ನನ್ನು  ಹೆಚ್ಚು  ಬೈದಿದ್ದಾರೆ,   ಆದರೆ   ಅವೆಲ್ಲವು  ನನಗೆ  ಪ್ರೀತಿಯಿಂದ  ಕಂಡಿವೆ.  ಯಾಕೆಂದರೆ  ಬೈದನಂತರ  ಅವರು  ನನ್ನನ್ನು  ಸಂತೈಯಿಸುತ್ತಾರೆ.  ಇದನ್ನು  ಬೇರಾರು  ನನಗೆ  ಮಾಡಿಲ್ಲ.  ಒಟ್ಟಿನಲ್ಲಿ  ನನ್ನ  ತಾತಾ  ನನ್ನ   ಅದೃಷ್ಟ.  

ಇದನ್ನು   ಓದಿ  ಇವಳೆನು  ತನ್ನ   ತಂದೆ  ತಾಯಿಯ  ಬಗ್ಗೆ  ಹೀಗೆ  ಬರೆದ್ದಿದ್ದಾಳೆಂದು  ಕೊಂಡರೆ  ಕ್ಷಮಿಸಿ.  ನೋಡುವವರ  ಕಣ್ಣಿಗೆ   ನೋವು  ಕಾಣಿಸುವುದಿಲ್ಲ.  ನೋಂದವರಿಗೆ  ಮಾತ್ರ  ನೋವು  ತಿಳಿಯುವುದು.

Monday, November 29, 2010

ಹಿಗೊಂದು  ಸಂಭಂದ

ಇವಳನ್ನ  ಮುಗ್ದೆ  ಎನ್ನಬೇಕೋ?  ಮೂರ್ಖೆ  ಎನ್ನಬೇಕೋ?  ನಿವೇ  ನಿರ್ಧರಿಸಿ.

ಅವಳಿಗೆ  ಅವನೆಂದರೆ ಅಪಾರ  ನಂಬಿಕೆ, ಪ್ರೀತಿ,  ವಾತ್ಸಲ್ಯ,  ಅಕ್ಕರೆ  ಹಾಗೂ  ಭಕ್ತಿ.  ಇವೇಲವು  ಅವನ  ಮೇಲೆ ಅವಳಿಗರಿವಿಲ್ಲದೆ  ಬಂದದ್ದು.  ಸಾಮಾನ್ಯವಾಗಿ  ಎಲ್ಲರು  ಅವನನ್ನು  ನೆನೆಯಲು  ಸಮಯ  ನಿಗದಿಪಡಿಸಿಕೊಂಡಿರುತ್ತಾರೆ.  ಆದರೆ  ಅವಳಿಗೆ  ಸಮಯದ  ಅರಿವಿಲ್ಲ.  ಪ್ರತಿ  ಕ್ಷಣ  ಅವನನ್ನು   ನೆನೆಯುವುದೆ  ಅವಳ  ಮುಖ್ಯ  ಕೆಲಸ.  ಅವಳದೆ  ಆದ  ಒಂದು  ಪುಟ್ಟ  ತೊಟವೊಂದಿದೆ.  ಅದರಲ್ಲಿ  ಅರಳಿದ  ಒಂದು  ಹೂವನ್ನು  ಅವಳು  ತನ್ನ  ತಲೆಯಲ್ಲಿರಿಸುವುದಿಲ್ಲ  ಆ  ಹೂ  ಎಂದಿಗೂ  ಅವನಿಗೆ  ಮೀಸಲು.  ಅವಳಲ್ಲಿ  ಅವನ  ಅದೆಷ್ಟು   ವಿಗ್ರಹಗಳಿವೆಯೋ,  ಭಾವಚಿತ್ರಗಳಿವೆಯೋ?  ಅವೆಲ್ಲವೂ  ಅವಳಿಗೆ  ಬಂದ  ಉಡುಗೊರೆಗಳೆ.  ಅವಳು  ಅವನನ್ನು  ಯಾವ  ಪರಿ  ನೆನೆಯುವಳೆಂದರೆ ಒಂದು  ಮುಂಜಾನೆ  ಅವಳಮ್ಮ  ಅವಳಲ್ಲಿ  ಕೆಳಿದರು ರಾತ್ರಿ  ಯಾಕೇ  ಮಾತಾನಾಡುತ್ತಿದ್ದೆ  ಎಂದು.  ಅದಕ್ಕೆ  ಅವಳು  ಕೆಳಿದಳು  ಏನು  ಮಾತಾನಾಡುತ್ತಿದ್ದೆ  ಎಂದು.  ಅವರಮ್ಮನ  ಉತ್ತರದಿಂದ  ಅವಳಿಗೆ  ತುಂಬಾ ಸಂತೋಷವಾಗಿತ್ತು  ಕಾರಣ  ಅವಳು  ಕನವರೆಸಿದ್ದು  ಅವನ  ಹೆಸರು.  ಅವಳು  ಅವನನ್ನು  ತುಂಬಾ  ನಂಬುತ್ತಾಳೆ  ಪ್ರೀತಿಯಿಂದ  ಬೈದದ್ದು  ಉಂಟು.  ಅವಳ  ಹುಟ್ಟುಹಬ್ಬಕ್ಕೆ  ಹೊಸ  ಬಟ್ಟೆ  ಕರಿದಿಸುವಳೊ  ಇಲ್ಲವೋ   ಅವನ  ಹುಟ್ಟುಹಬ್ಬಕ್ಕೆ  ಮರೆಯದೆ  ಕರಿದಿಸಿ  ಸಂಬ್ರಮಿಸುತ್ತಾಳೆ.  ಅವಳನ್ನು  ಅತೀ  ಹೆಚ್ಚು   ಪ್ರೀತಿಸುವುದು  ಅವನೇ  ಎಂದು  ತಿಳಿದಿದ್ದಾಳೆ.  ಅವನ  ಬಗ್ಗೆ  ಅವಳೋಂದಿಗೆ  ತರ್ಕ  ಮಾಡಲು  ಯಾರಿಂದಲು  ಸಾಧ್ಯವಿಲ್ಲ.  ಅವಳು  ಎಂದು  ಕಾಣದ  ಅವನಲ್ಲಿ  ಸದಾ  ಮಾತಾನಾಡುತ್ತಿರುತ್ತಾಳೆ.  ಅವಳಿಗೆ  ಅವನ್ನುತ್ತರದ   ಅವಶ್ಯಕತೆ  ಇಲ್ಲ.  ಯಾಕೆಂದರೆ  ಅವನು  ಸದಾ  ತನೊಂದಿಗಿರುವನೆಂಬ  ಬಲವಾದ  ನಂಬಿಕೆ.  ಇಷ್ಟಕ್ಕು  ಜೀವನವೆಂದರೆ  ನಂಬಿಕೆ  ಅಲ್ಲವೇ.  ಒಮ್ಮೊಮ್ಮೆ ಅವಳು  ಹೀಗೂ  ಯೋಚಿಸುತ್ತಾಳೆ ಸಮಯವಿಲ್ಲದ  ಸಮಯದಲ್ಲಿ  ನೆನೆಯುವುದರಿಂದ  ಅವನಿಗೆನಾದರೂ  ತೊಂದರೆಯುಂಟಾಗುತ್ತದೆಯೋ ಎಂದು.  ಅವಳಿಗೆ  ಇಷ್ಟವಿಲ್ಲದ  ವಿಷಯ  ಒಂದಿದೆ  ಅದೇನೆಂದರೆ  ಅವನನ್ನು  ಇವಳು  ಬಿಟ್ಟು  ಬೆರಾರು  ನೆನೆಯಬಾರದು.  ಆದರೆ  ಯಾರಿಗಾದರೆ  ಅವನಿಷ್ಟವೆಂದು  ಇವಳಿಗೆ  ತಿಳಿದರೆ  ಅವರಮೇಲೆ  ಇವಳಿಗೆ  ಪ್ರೀತಿ  ಹೆಚ್ಚಾಗುತ್ತದೆ.

ಇಷ್ಟು   ಓದಿದ  ನಂತರ  ನಿಮಗೆ  ತಿಳಿದಿರುತ್ತದೆ  ಅ  ಅವನು  ಮನುಷ್ಯನಲ್ಲವೆಂದು. ಅವನು  ಬೆರಾರು  ಅಲ್ಲ  ಶ್ರೀ ಪಾರ್ವತಿಪರಮೇಶ್ವರನ  ಪುತ್ರ  ಶ್ರೀಗಣೇಶ.  ಅದರೆ  ಅವಳಿಗೆ  ಮಾತ್ರ  ಅವನು  ಸಾಮಾನ್ಯ  ಮನುಷ್ಯ  ಹಾಗೂ  ಅವಳ  ಪ್ರಿತಿಯ  ಅಣ್ಣ.  ಅಕ್ಕರೆಯಿಂದ  ನೋಡಿಕೊಳ್ಳುವ  ಪ್ರೀತಿಯಿಂದ  ಮಾತಾನಾಡಿಸುವ ಅವಳೊಂದಿಗೆ  ಸದಾ  ಇರುವ  ಪ್ರೀತಿಯ ಅಣ್ಣ. ಅವಳ  ಪ್ರೀತಿಯ  ಅಣ್ಣ  ಮಾತ್ರ............

Monday, November 22, 2010

ನಾ  ಕಂಡಂತೆ  ಧರ್ಮಸ್ಥಳ
 

ಶ್ರೀ  ಕ್ಷೇತ್ರ ಧರ್ಮಸ್ಥಳ

"ಇದು  ನನ್ನ  ಮೊದಲ  ಬರವಣಿಗೆ  ತಪ್ಪಿದ್ದರೆ  ಕ್ಷಮೆ  ಇರಲಿ"

ಸುಂದರ  ಪ್ರಕೃತಿಯ  ಮಡಿಲಲ್ಲಿ  ಶ್ರೀ ಮಂಜುನಾಥನ  ಮಂದಿರ. ಅ  ದಯಾಮಯಿಯನ್ನು  ನೊಡಲು  ಎರಡು  ಕಣ್ಣು  ಸಾಲದು. ಅವನನ್ನು  ನೆನೆದರೆ  ಸಾಕು ಈ  ಜೀವನಕ್ಕೆ  ಇನ್ನೆನ್ನು  ಬೇಕು.  ಅವನ ಧ್ಯಾನದಿಂದ  ಪರಿಪುರ್ಣವಲ್ಲವೆ  ಈ  ಜೀವನ.  ಅ  ಮಂಜುನಾಥನನ್ನೆ  ನೋಡಿಕೊಳ್ಳಲು  ಅವನೇ  ನೇಮಿಸಿಕೊಂಡ  ನಿಸ್ವಾರ್ಥ  ಸೇವಕರು  ಶ್ರೀ ವೀರೆಂದ್ರ  ಹೆಗ್ಡೆಯವರು.  ಆ  ಮಂದಿರದ  ಪ್ರತಿಯೊಂದು  ನಿಯಮವು  ಅವರ  ನಿಸ್ವಾರ್ಥತೆಯನ್ನು  ಸಾರುತ್ತದೆ.  ಎಲ್ಲ  ಭಕ್ತರಿಗು  ಒಂದೆ  ನಿಯಮ  ಅವನು  ಧನಿಕನಾಗಲಿ ಅಥವಾ  ಬಡವ?  ಎಲ್ಲರು  ಸಾಲಿನಲ್ಲಿ  ಬಂದೆ  ಆ  ಕರುಣಾಮಯಿ  ಶ್ರೀ  ಮಂಜುನಾಥನ  ದರ್ಶನ  ಮಾಡಬೇಕು.  ಅಲ್ಲಿ  ಉಳಿದುಕೊಳ್ಳುವ  ಕೊಠಡಿಯ ಬಾಡಿಗೆ  ಮೊತ್ತ  ರೂ.೧೦  ನಾವು  ಖಾಲಿಮಾಡುವಾಗ  ಅದೆ  ಮೊತ್ತದ  ಉಪಯುಕ್ತ  ಪುಸ್ತಕ  ನಮಗೆ  ಉಚಿತವಾಗಿ  ದೊರೆಯುತ್ತದೆ. ಖಾಲಿ  ಇಲ್ಲದಿರುವಾಗ ಅದಕ್ಕೆಂದು  ಬೆರೆಯೆ  ವ್ಯವಸ್ತೆಯಿದೆ  ಅದೆನೆಂದರೆ  ಮಲಗಲು  ಉಚಿತ  ಸ್ಥಳ  ಜೊತೆಗೆ  ಒಂದು ಚಾಪೆ.  ಉಚಿತ  ಪಾಯಿಕಾನೆಗಳು(Toilet) ಹಾಗೂ  ಸ್ನಾನದ ಮನೆ ಅದು  ಶುಚಿತ್ವವಾಗಿ  ಇಲ್ಲದಿದ್ದರೆ  ಅದಕ್ಕೆ  ಕಾರಣ  ಸಾರ್ವಜನಿಕರೆ (ಈ  ಸಾರ್ವಜನಿಕರಿಗೆ  ಶುಚಿತ್ವವಾಗಿ  ಇಟ್ಟುಕೊಳ್ಳಲು  ಬರುವುದಿಲ್ಲವಲ್ಲ). (ಈ  ಲೇಖನ  ಓದುವ  ಎಲ್ಲಾ  ಭಕ್ತರಲ್ಲಿ  ನನ್ನದೊಂದು  ಮನವಿ  ಯಾರೇ  ಯಾವುದೇ  ಪುಣ್ಯ  ಕ್ಷೇತ್ರಕ್ಕೆ  ಹೋದರು ನಿಮ್ಮ  ಮನೆಯೆಂದು  ತಿಳಿದು  ಅಲ್ಲಿನ  ಶುಚಿತ್ವವನ್ನು  ಕಾಪಾಡಿ).  ಯಾವುದಕ್ಕು  ಹಣದ  ಅಪೇಕ್ಷೆ  ಇಲ್ಲ.  ಅಲ್ಲಿ  ಕೆಲಸ  ನಿರ್ವಹಿಸುವ  ಪ್ರತಿಯೊಬ್ಬರು  ಸೌಮ್ಯವಾಗಿ  ವರ್ತಿಸುತ್ತಾರೆ  ಇದೆಲ್ಲ ಧರ್ಮಾಧೀಕಾರಿ ಹೆಗ್ಡೆಯವರ ಮಾರ್ಗದರ್ಶನದಿಂದ.  ಉಚಿತ  ಭೋಜನ ಸಾಲಿನಲ್ಲಿ  ನಿಲ್ಲುವ  ಅವಶ್ಯಕತೆಯಿಲ್ಲ  ಕಾರಣ  ತುಂಬಾ  ದೊಡ್ಡದಾದ  ಭೋಜನಶಾಲೆ.  ಉಚಿತ  ಮದುವೆ.  ಇಂತಹ   ಪುಣ್ಯದ  ಕಾರ್ಯವನ್ನು   ಶ್ರೀ  ಮಂಜುನಾಥನ  ದಯೆಯಿಂದ ಧರ್ಮಾಧೀಕಾರಿ  ಶ್ರೀ  ಹೆಗ್ಡೆಯಂತವರಿಂದ  ಮಾತ್ರ  ಸಾಧ್ಯ. ಅಲ್ಲಿನ ಒಂದು ಪ್ರತೀತಿ (ಮನೆಯ  ಹಿರಿಯರ  ಮಾತು) ಅದೆನೆಂದರೆ  ಆ  ದಯಮಯಿ  ಶ್ರೀ  ಮಂಜುನಾಥನನ್ನು  ದರ್ಶನಮಾಡುವ  ಮೊದಲು  ನೇತ್ರಾವತಿಯಲ್ಲಿ  ಸ್ನಾನಮಾಡಬೇಕೆಂಬುದು   ಅದರೆ  ಅಲ್ಲಿ  ಸ್ನಾನಮಾಡಲು  ಮನಸೇ  ಆಗುವುದಿಲ್ಲ  ಕಾರಣ  ಅದು  ಶುಚಿಯಾಗಿಲ್ಲದಿರುವುದು (ಅದಕ್ಕೂ  ಸಾರ್ವಜನಿಕರೆ  ಕಾರಣ).  ಒಂದು  ಹೇಳಲೆಬೇಕಾದ ವಿಷಯ  ಇಲ್ಲಿ    ವಿಧ್ಯಾಭ್ಯಾಸದ  ವ್ಯವಸ್ಥೆ  ಕೂಡ  ಇದೆ.  ಧರ್ಮಾಧೀಕಾರಿಗಳು  ಪ್ರತಿ  ವರ್ಷವು  ಬೇರೆ  ಬೇರೆ  ಊರಿನಲ್ಲಿ ರೈತರಿಗಾಗಿ  ಒಂದು  ಮೇಳವನ್ನು  ಏರ್ಪಡಿಸುತ್ತಾರೆ  (ರೈತಮೇಳ - ಜಾತ್ರೆ).   ಅದರಲ್ಲಿ  ಲಕ್ಷಂತರ  ರೈತರು  ಪಾಲ್ಗೊಳ್ಳುತ್ತಾರೆ.  ಸ್ಪರ್ಧೆಗಳನ್ನು   ಏರ್ಪಡಿಸಿರುತ್ತಾರೆ.  ಗೆದ್ದವರಿಗೆ  ಬಹುಮಾನಗಳನ್ನು  ವಿತರಿಸುತ್ತಾರೆ.